ಯಕ್ಷಗಾನ ಹೆಸರಾಂತ ಕಲಾವಿದರಿಗೆ ಸನ್ಮಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ನವ೦ಬರ್ 26 , 2013
|
ನವ೦ಬರ್ 26 , 2013
|
ಯಕ್ಷಗಾನ ಹೆಸರಾಂತ ಕಲಾವಿದರಿಗೆ ಸನ್ಮಾನ
ಶಿರಸಿ :
ಯಕ್ಷಗಾನ ಪ್ರದರ್ಶನ ನಡುವೆ ಹೆಸರಾಂತ ಕಲಾವಿದರಿಗೆ ಸನ್ಮಾನ ನಡೆಯಿತು. ಆ ಮೂಲಕ ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಗೆ ಮೂವರು ಕಲಾವಿದರನ್ನು ಕಲಾಭಿಮಾನಿಗಳ ಕರತಾಡನದ ಮಧ್ಯೆ ಗೌರವಿಸಲಾಯಿತು. ಇಂಥದ್ದೊಂದು ಅಪರೂಪದ ಕಾರ್ಯಕ್ರಮ ಸಂಘಟಿತವಾಗಿದ್ದು ಇಲ್ಲಿಯ ಎಂಇಎಸ್ ವಾಣಿಜ್ಯ ಕಾಲೇಜಿನ ಸಿಲ್ವರ್ ಜ್ಯೂಬಿಲಿ ಹಾಲ್ನಲ್ಲಿ.
ಭಾನುವಾರ ಸಂಜೆ ಯಕ್ಷ ಚಾವಡಿ ಸಂಘಟನೆಯು ಆಯೋಜಿಸಿದ್ದ ಮಂಥರೆಯ ಮೋಡಿ ಹಾಗೂ ವಿಷವನ್ನು ಅಳಿಸಿದ ವಿಷಯೆ ಆಖ್ಯಾನ ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದ ಗಾನ ಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ, ಹೆಸರಾಂತ ಮದಂಗವಾದಕ ಶಂಕರ ಭಾಗವತ ಯಲ್ಲಾಪುರ ಹಾಗೂ ಹಾಸ್ಯ ಕಲಾವಿದ ಶ್ರೀಧರ ಹೆಗಡೆ ಚಪ್ಪರಮನೆ ಅವರನ್ನು ಸನ್ಮಾನಿಸಲಾಯಿತು.
ಸಹಕಾರಿ ಪ್ರಮುಖರಾದ ಎನ್.ಪಿ.ಗಾಂವಕರ, ಎಸ್.ಪಿ.ಶೆಟ್ಟಿ, ಎಂಇಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ಪತ್ರಕರ್ತ ಅಶೋಕ ಹಾಸ್ಯಗಾರ, ಯಕ್ಷ ಚಾವಡಿಯ ಎಸ್.ಎಸ್.ಭಟ್ಟ ಕಲಾವಿದರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಎನ್.ಪಿ.ಗಾಂವಕರ ಮಾತನಾಡಿ, ಯಕ್ಷಗಾನದಂತ ಕಲೆಯ ಉಳಿವಿಗೆ ಎಲ್ಲರ ಪ್ರೋತ್ಸಾಹ ಅಗತ್ಯವಿದೆ. ಇಂಥ ಹಿರಿಯ ಕಲಾವಿದರಿಗೆ ಸನ್ಮಾನಿಸುವ ಮೂಲಕ ಯಕ್ಷ ಚಾವಡಿ ಉತ್ತಮ ಕಾರ್ಯ ಮಾಡಿದೆ ಎಂದು ಶ್ಲಾಘಿಸಿದರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು.
ಕೃಪೆ :
http://vijaykarnataka.com
|
|
|